ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ತಿಂಡಿ ತಿಂದ ತಕ್ಷಣ ಟೀ, ಕಾಫಿ ಕುಡಿಯಬಾರದು

ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ಈ ರೂಢಿಯಿಂದಾಗಿ ಆರೋಗ್ಯದ ಮೇಲೆ ಅನೇಕ ವ್ಯತೀರೀಕ ಪರಿಣಾಮವುಂಟಾಗುತ್ತದೆ, ಎಂದು ಸಂಶೋಧಕರು ಹೇಳುತ್ತಾರೆ.

ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ರಕ್ತಹೀನತೆ ಉಂಟಾಗುತ್ತದೆ. ಶೇ. ೫೦ ರಷ್ಟು ಜನಕ್ಕೆ ಈ ರಕ್ತಹೀನತೆ ಕಂಡು ಬಂದಿದೆ. ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಕಬ್ಬಿಣದ ಅಂಶ ಇದ್ದರೂ ಜೀರ್ಣನಾಳ (ಕರುಳುಗಳು) ಈ ಕಬ್ಬಿಣದ ಅಂಶವನ್ನು ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ. ಈ ಹೀರಿಕೊಳ್ಳುವಲ್ಲಿ ಅಡ್ಡಿಪಡಿಸುವ ಅಂಶವೇ ನಾವು ಕಾಫಿ ಟೀಗಳನ್ನು ತಿಂಡಿಯ ನಂತರ ನಡುವೆ ಕುಡಿಯುತ್ತ ಹೋಗುವುದರಿಂದ ಆಗುತ್ತದೆ. ಈ ಟೀ ಕಾಫಿಯಲ್ಲಿರುವ ‘ಟ್ಯಾನಿನ್’ ಎಂಬ ಪದಾರ್ಥವು ಕಬ್ಬಿಣಾಂಶದ ಹೀರುವಿಕೆಯನ್ನು ತಡೆಗಟ್ಟುತ್ತದೆ. ದಕ್ಷಿಣ ಭಾರತೀಯರು ಸೇವಿಸುವ ಯಾವುದೇ ತಿಂಡಿಯಿಂದ ಕರಳು ೦.೪ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ರಕ್ತಹೀನತೆಯನ್ನು ಪ್ರತಿಬಂಧಿಸಲು ಪ್ರತಿಯೊಬ್ಬರಿಗೆ ನಿತ್ಯ ಒಂದು ಮಿ.ಗ್ರಾಂ. ಕಬ್ಬಿಣಾಂಶದ ಅಗತ್ಯವಿದೆ. ಈ ಲೆಕ್ಕಾಚಾರದಂತೆ ನಮಗೆ ನಮ್ಮ ನಿತ್ಯದ ತಿಂಡಿಯಿಂದಲೇ ಸಾಕಷ್ಟು ಕಬ್ಬಿಣಾಂಶದ ದೊರಕುತ್ತದೆ. ಕಾಫಿ, ಟೀಯಲ್ಲಿ ಇರುವ ‘ಟ್ಯಾನಿನ್’ ಎಂಬ ಪದಾರ್ಥ ಕಬ್ಬಿಣಾಂಶದ ಹೀರುವಿಕೆಗೆ ತೊಡರುಗಾಲು ಹಾಕುತ್ತದೆ. ಹೀಗಾಗಿ ತಿಂಡಿ ತಿಂದ ತಕ್ಷಣ ಕಾಫಿ ಕುಡಿದರೆ ಕರಳು ಕೇವಲ ೦.೨ ಮಿ.ಗ್ರಾಂ. ಕಬ್ಬಿಣಾಂಶವನ್ನು ಹೀರಲು ಶಕ್ಯವಾಗುತ್ತದೆ. ಟೀ ಕುಡಿದರೆ ಕಬ್ಬಿಣಾಂಶದ ಹೀರುವಿಕೆಯ ಪ್ರಮಾಣ ೦.೧ ಮಿ.ಗ್ರಾಂ ಗೆ ಇಳಿಯುತ್ತದೆ. ಏಕೆಂದರೆ ಟೀಯಲ್ಲಿ ಕಾಫಿಯಲ್ಲಿರುವುದಕ್ಕಿಂತ ಹೆಚ್ಚು ಟ್ಯಾನಿನ್ ಇರುತ್ತದೆ.

ವೈಜ್ಞಾನಿಕ ವಾಸ್ತವತೆ ಹೀಗಿರುವಾಗ ತಿಂಡಿತಿಂದ ತಕ್ಷಣ, ನಡುನಡುವೆ ಕಾಫಿ, ಟೀ ಕುಡಿಯುವುದು ಒಳ್ಳೆಯದಲ್ಲ. ಹಾಗೆಂದ ಮಾತ್ರಕ್ಕೆ ತಿಂಡಿಯನ್ನೇನು ಬಿಡುವ ಅಗತ್ಯವಿಲ್ಲ. ಅದೇ ವಿಜ್ಞಾನಿಗಳು ಹೇಳುವ ಪ್ರಕಾರ ತಿಂಡಿ ತಿಂದ ಮೇಲೆ ಕಾಫಿ, ಟೀ ಕುಡಿಯದಿದ್ದರೆ ಸಮಾಧಾನವೆ ಇರುವುದಿಲ್ಲ ಎನ್ನುವವರಿಗೆ ಒಂದು ಮಾರ್ಗೋಪಾಯ ಹೇಳಿದ್ದಾರೆ. ಅಂದರೆ ತಿಂಡಿ ತಿಂದ ಅರ್ಧಗಂಟೆಯ ನಂತರ ಕಾಫಿ ಟೀ ಕುಡಿದರೆ ಕರುಳುಗಳ ಮೇಲೆ ‘ಟ್ಯಾನಿನ್’ ಪ್ರಭಾವ ಬೀರಲಾರದು; ಎಂದು ಹೇಳಿದ್ದಾರೆ. ಇದೇ ವಿಜ್ಞಾನಿಗಳು ಕಬ್ಬಿಣದ ಅಂಶವನ್ನು ವೃದ್ದಿಸುವ ‘ಸಿ’ ಜೀವಸತ್ವವುಳ್ಳ ಮೋಸುಂಬೆ, ನಿಂಬೆ, ಇತರ ಪೇಯಗಳನ್ನು ತಿಂಡಿ ತಿಂದ ನಂತರ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ, ವರ್ಧಿಸುತ್ತದೆ, ಎಂಬುವುದನ್ನು ಕಂಡು ಹಿಡಿದಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕಾಚಾರವನು ಲೆಕ್ಕಚಾರಗೊಳಿಸಲುಂಟೇ ?
Next post ಹಿಂದೂ ದೇಶ ದೊಡ್ಡದು

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys